ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

Calender of Events

ಕಾರ್ಯಕ್ರಮಗಳ ಕ್ಯಾಲೆಂಡರ್

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ



ಕ್ರ ಸ೦

ಕಾರ್ಯಕ್ರಮದ ಹೆಸರು

ವಿವರಗಳು

ಸ೦ಭವನೀಯ ದಿನಾ೦ಕ

 

1

 

ಚೈತ್ರ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ಚೈತ್ರ ಮಾಸ ಬಹುಳ ಪಂಚಮಿ ದಿವಸದಂದು ಶ್ರೀ ಸಂಗಮೇಶ್ವರ ದೇವರ ರಥೋತ್ಸವ ಜರುಗುವದು. ರಥೋತ್ಸವ ಜರುಗುವ ಹಿಂದಿನ 9 ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಕೆಳಗಿನಂತಿವೆ.


1) ರಥೋತ್ಸವಹಿಂದಿನ 9 ದಿನಗಳಂದು ಪ್ರತಿ ದಿನ, ಪ್ರವಚನ, ನಾಟಕ, ಇದಲ್ಲದೇ 9 ದಿನಗಳು ಪಲ್ಲಕ್ಕಿ ಉತ್ಸವ ಜರುಗುತ್ತವೆ.


2) ದವನದ ಹುಣ್ಣಿಮೆ ದಿನದಂದು ಶ್ರೀ ಬಸವೇಶ್ವರ ಹಾಗೂ ನೀಲಾಂಬಿಕೆ ಲಗ್ನ ಪತ್ರಿಕೆ ಕಟ್ಟುವದು, ನಂತರ 5 ದಿನಗಳವರೆಗೆ ಪುರವಂತರ ಮೆರವಣಿಗೆ ನಡೆಯುವುವದು.


3) ಹುಣ್ಣಿಮೆ ಆದ ನಾಲ್ಕನೆ ಮತ್ತು ಐದನೆ ದಿನಗಳಂದು ಬೆಳಿಗೆ,5-00 ಘಂಟೆಗೆ ಶ್ರಿ.ಹುಚ್ಚಯ್ಯಾನ ರಥೋತ್ಸವ ಜರುಗುವದು.


4) ಚೈತ್ರ ಬಹುಳ ಪಂಚಮಿ ದಿವಸದಂದು ಬೆಳಿಗ್ಗೆ 9-00 ಘಂಟೆಗೆ ಬಾಗಲಕೋಟ ಪಟ್ಟಣದಿಂದ ಮೇರವಣಿಗೆಯೊಂದಿಗೆ ಶ್ರಿಸಂಗಮೇಶ್ವರ ರಥದ ಕಳಸ ಕೂಡಲಸಂಗಮಕ್ಕೆ ಆಗಮಿಸುವದು ಮತ್ತು ಸಾಯಂಕಾಲ 6-00 ಘಂಟೆಗೆ ರಥೋತ್ಸವು ಜರುಗುವದು.

 

5) ರಥೋತ್ಸವದ ನಂತರ ಏಳನೆ ದಿವಸದಂದು ನೀಲಮ್ಮನ ಪಲ್ಲಕ್ಕಿ ಉತ್ಸವ ನಡೆಯುವದು.

 

 

2

 

ವೈಶಾಖ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

 

ಅಕ್ಷಯ ತೃತೀಯ ದಿನದಂದು ಬಸವ ಜಯಂತಿಯನ್ನು ಶ್ರೀ ಬಸವೇಶ್ವರರ ಭಾವ ಚಿತ್ರದ ಮೆರವಣೆಗೆ ಕಾರ್ಯಕ್ರಮ ಜರುಗುವದು

 

 

3

 

ಶ್ರಾವಣ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ಶ್ರಾವಣ ಮಾಸದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರದಂದು ವಿಶೇಷ ಪೂಜೆ, ಅರ್ಚನೆಗಳನ್ನು ಮಾಡಲಾಗುವದು.

ಶ್ರಾವಣ ಮಾಸದ ಕೊನೆಯ ಗುರುವಾರದಂದು ನದಿಯ ಮಧ್ಯದ ದ್ವೀಪದಲ್ಲಿರುವ ಚರಲಿಂಗೇಶ್ವರ ಮೂರ್ತಿಗೆ ಅಭಿಷೇಕ ಜರುಗಿಸಿ ತಂಗಡಿಗಿಯ ನೀಲಮ್ಮನ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಜರುಗುವದು.

 

 

4

 

ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ದೀಪಾವಳಿ ಪ್ರತಿಪದೆ ಪಾಡ್ಯ ದಿವಸದಂದು ಏಳ್ಳ ಅಮವಾಸೆ ಬರುವುದಕ್ಕಿಂತ ಮುಂಚಿನ ಸೋಮವಾರದವರೆಗೆ ದೇವಸ್ಥಾನದಲ್ಲಿ ನಿತ್ಯ ದೀಪೋತ್ಸವ ನಡೆಯುವದು. ಕಾರ್ತಿಕ ಮಾಸದ ಕೊನೆಯ ದಿನ ಪಲ್ಲಕ್ಕಿ ಜರುಗುವದು. ಅದಲ್ಲದೆ ಪುರವಂತರ ಮೆರವಣಿಗೆಯೂ ಸಹ ನಡೆಯುವದು.

 

 

 

5

 

ಪುಷ್ಯ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

 

ಮಕರ ಸಂಕ್ರಾಂತಿ ಉತ್ಸವದಂದು ಸಹಸ್ರಾರು ಭಕ್ತರು ನದಿ ಸ್ನಾನ ಮಾಡಿ ಪುನಿತರಾಗುವರು ಅದೇ ದಿವಸ ಸಾಯಂಕಾಲ ಶ್ರೀ.ಸಂಗಮೇಶ್ವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗುವದು. ಅದಲ್ಲದೇ ಶರಣ ಮೇಳವೂ ಸಹ ಜರುಗುವದು.